ತಜಂಕ್ ಸೊಪ್ಪು ವಡೆ, ಇದನ್ನು ಇಂಗ್ಲಿಷ್‌ನಲ್ಲಿ ಕ್ಯಾಸಿಯ ತೋರ ( ) ಅಥವಾ ಏಂದು, ಹಾಗು ಕನ್ನಡದಲ್ಲಿ ತಗಟೆ ಸೊಪ್ಪು ಏಂದು ಕರೆಯುತ್ತಾರೆ. ಇದು ಮುಖ್ಯವಾಗಿ ಮಳೆಗಾಲದಲ್ಲಿ ತೆರೆದ ಮೈದಾನದಲ್ಲಿ ಅಥವಾ ರಸ್ತೆ ಬದಿಯಲ್ಲಿ ಕಳೆಯಾಗಿ ಬೆಳೆಯುತ್ತದೆ. ಇದು ತುಂಬಾ ಉಪಯುಕ್ತವಾದ ಸಸ್ಯವಾಗಿದೆ ಮತ್ತು ಹೆಚ್ಚಾಗಿ ಎಲ್ಲರೂ ನಿರ್ಲಕ್ಷಿಸುತ್ತಾರೆ. ಈ ಸಸ್ಯದ ಎಲೆಗಳನ್ನು ಔಷಧಿಯಾಗಿ ಮಾತ್ರ ಬಳಸಲಾಗುವುದಿಲ್ಲ; ಇದರ ಬೀಜಗಳನ್ನು ಆಯುರ್ವೇದದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಕರಾವಳಿ ಪ್ರದೇಶಗಳಲ್ಲಿ ಅದರ ಎಳೆಯ ಎಲೆಗಳಿಂದ ಸಾಕಷ್ಟು ಭಕ್ಷ್ಯಗಳನ್ನು ತಯಾರಿಸುತ್ತಾರೆ ಅದರಲ್ಲಿ ವಡೆ ಅಥವಾ ಪನಿಯಾಣಗಳು ಅವುಗಳಲ್ಲಿ ಒಂದಾಗಿದೆ. ಈ ಪನಿಯಾಣಗಳನ್ನು ಲಘು ಆಹಾರವಾಗಿ ಅಥವಾ ಊಟಕ್ಕೆ/ಭೋಜನಕ್ಕೆ ಪಲ್ಯವಾಗಿ ಬಳಸುತ್ತಾರೆ . ಈ ಮಳೆಗಾಲದ ಖಾದ್ಯವನ್ನು ಕೊಂಕಣಿಯಲ್ಲಿ ಡಂಗರ್ ಎಂದೂ ಕರೆಯುತ್ತಾರೆ. == ಔಷಧೀಯ ಗುಣ == ಜಗಟೆ ಆರ್ಯುವೇದದಲ್ಲಿಯ ವಿಶಿಷ್ಟ ಸ್ಥಾನವನ್ನು ಪಡೆದಿದೆ. ಜಗಟೆಯ ಒಣಬೀಜವನ್ನು ತೆಗೆದುಕೊಂಡು ಪುಡಿಮಾಡಿ ಅದರಿಂದ ಕಾಫಿಯನ್ನು ಮಾಡುತ್ತಾರೆ. ಇದು ದೇಹಕ್ಕೆ ತಂಪು ನೀಡುತ್ತದೆ. ಗಾಯಕ್ಕೆ ಇದರ ರಸವನ್ನು ಹಚ್ಚಿದರೆ ಉರಿ ಕಡಿಮೆಯಾಗುತ್ತದೆ. ರಕ್ತವನ್ನು ಶುಧ್ಧೀಕರಿಸುವ ಗುಣವನ್ನು ಹೊಂದಿರುವ ತಜಂಕ್ ಕಿಬ್ಬೊಟ್ಟೆ ನೋವು, ಉರಿಯೂತ, ಮಲಬಧ್ಧತೆ, ಬೊಜ್ಜು ಕರಗಿಸುವಲ್ಲಿಯು ಪರಿಣಾಮಕಾರಿಯಾಗಿದೆ. == ತಜಂಕ್ ವಡೆಗೆ ಬೇಕಾಗುವ ಪದಾರ್ಥಗಳು == ದೋಸೆ ಅಕ್ಕಿ - ¾ ಕಪ್ ತೊಗರಿ ಬೇಳೆ - 2 ಚಮಚ ಒಣ ಮೆಣಸಿನಕಾಯಿ - 5-8 (ಬ್ಯಾಡಗಿ) ಉಪ್ಪು - ರುಚಿಗೆ ತಕ್ಕಷ್ಟು ಹಿಂಗು - ಒಂದು ಚಿಟಿಕೆ ಹುಣಸೆಹಣ್ಣು - ½ ಸಣ್ಣ ಚಮಚ ತುರಿದ ತೆಂಗಿನಕಾಯಿ - ½ ಕಪ್ ಕತ್ತರಿಸಿದ ಈರುಳ್ಳಿ - 1 == ಮಾಡುವ ವಿಧಾನ == ಅಕ್ಕಿ ಮತ್ತು ಬೇಳೆಯನ್ನು ತೊಳೆದು 3 ಗಂಟೆಗಳ ಕಾಲ ನೆನೆಸಿಡಿ. ಕೆಂಪು ಮೆಣಸಿನಕಾಯಿಯನ್ನು ಹುರಿದು, ಈರುಳ್ಳಿ ಕತ್ತರಿಸಿ, ಎಲೆಗಳನ್ನು ಸ್ವಚ್ಛಗೊಳಿಸಿ, ಕಾಂಡಗಳನ್ನು ತೆಗೆದುಹಾಕಿ, ಚೆನ್ನಾಗಿ ತೊಳೆದು , ಎಲೆಗಳನ್ನು ಕತ್ತರಿಸಿ ಅದನ್ನು ಸಿದ್ಧವಾಗಿಡಬೇಕು . ಮೊದಲಿಗೆ ತೆಂಗಿನಕಾಯಿ, ಹಿಂಗನ್ನು, ಉಪ್ಪು, ಕೆಂಪು ಮೆಣಸಿನಕಾಯಿಗಳನ್ನು ಪೇಸ್ಟ್ ಮಾಡಲು ರುಬ್ಬಿ. ಇದಕ್ಕೆ, ನೆನೆಸಿದ ಅಕ್ಕಿ ಮತ್ತು ದಾಲ್ ಮಿಶ್ರಣವನ್ನು ಸೇರಿಸಿ, ಸ್ವಲ್ಪ ನೀರು ಸೇರಿಸಿ ಸಣ್ಣ ರವಾ ಸ್ಥಿರತೆಗೆ ರುಬ್ಬಿಕೊಳ್ಳಿ.ಇದಕ್ಕೆ ಕತ್ತರಿಸಿದ ಎಲೆಗಳು, ಈರುಳ್ಳಿ ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಚಿಕ್ಕ ಕಡಾಯಿಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಅದು ಬಿಸಿಯಾಗಿರುವಾಗ, ಹಿಟ್ಟಿನ ಗಾತ್ರವನ್ನು ತೆಗೆದುಕೊಂಡು ಅಂಗೈಯಲ್ಲಿ ಸ್ವಲ್ಪ ತಟ್ಟಿ ಅದನ್ನು ಎಣ್ಣೆಯಲ್ಲಿ ಹಾಕಿ ಡೀಪ್ ಫ್ರೈ ಮಾಡಿ.ಇದನ್ನು ದಾಲ್ - ಅನ್ನ ಅಥವಾ ರಸಂ ಮತ್ತು ಅನ್ನದೊಂದಿಗೆ ಸೈಡ್ ಡಿಶ್ ಆಗಿಯೂ ತಿನ್ನಬಹುದು. == ಉಲ್ಲೇಖ ==